ನವದೆಹಲಿ: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮತ ಹಾಕಲು ತಮ್ಮ ಪಕ್ಷದ ವಿಧಾನಸಭೆ ಸದಸ್ಯರು ತಲಾ ಒಂದು ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆಂದು ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಕೇಳಿದ್ದಾರೆಎನ್ನಲಾದ ಪ್ರಕರಣ ಕುರಿತು ಸಮಗ್ರ ವರದಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕೇಂದ್ರ ಕೇಳಿದೆ.
ಕುಮಾರಸ್ವಾಮಿ ಪ್ರಕರಣ ಕುರಿತು ವರದಿ ಕೊಡುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಹೇಳಿದೆ. ಕುಮಾರಸ್ವಾಮಿ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿರುವ ಸಿ.ಡಿ ಪ್ರತಿ ಕಳುಹಿಸುವಂತೆಯೂ ತಿಳಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸುವುದಾಗಿ ಗೃಹ ಸಚಿವಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ವಿಜಾಪುರ ಜಿಲ್ಲೆ ಬಬಲೇಶ್ವರದ ಮುಖಂಡ ವಿಜುಗೌಡ ಪಾಟೀಲರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಅವರ ಬೆಂಬಲಿಗರು