ನವದೆಹಲಿ (ಪಿಟಿಐ): ರೈಲ್ವೆ ಮಂಡಳಿಯ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ 10 ಕೋಟಿ ರೂಪಾಯಿಗಳ ಲಂಚ ಪಡೆದ ಆಪಾದನೆ ಎದುರಿಸುತ್ತಿರುವ ತಮ್ಮ ಸಂಬಂಧಿ ವಿಜಯ್ ಸಿಂಗ್ಲಾ ಅವರು ನೇಮಕಾತಿ ವಿಚಾರದ ಬಗ್ಗೆ ಯಾವತ್ತೂ ತಮ್ಮ ಬಳಿ ಮಾತನಾಡಿಲ್ಲ ಎಂದು ರೈಲ್ವೆ ಖಾತೆಯ ಮಾಜಿ ಸಚಿವ ಪವನ್ ಕುಮಾರ್ ಬನ್ಸಲ್ ನ್ಯಾಯಾಲಯಕ್ಕೆ ತಿಳಿಸಿದರು.
ತಾವು ಸಚಿವರಾಗಿದ್ದಾಗ ಸಿಂಗ್ಲಾ ಮೂರು ಬಾರಿ ಭೇಟಿ ಆಗಿದ್ದರೂ ಕುಮಾರ್ ಅವರನ್ನು ರೈಲ್ವೆ ಮಂಡಳಿಯ ತಾಂತ್ರಿಕ ಸದಸ್ಯರನ್ನಾಗಿ ನೇಮಿಸುವ ಬಗ್ಗೆ ಮಾತನಾಡಿಲ್ಲ ಎಂದು ಬನ್ಸಾಲ್ ಅವರು ಸರ್ಕಾರಿ ಸಾಕ್ಷಿಯಾಗಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.