ಹಾಸನ/ ಕುಂದಗೋಳ/ ಎಚ್ಡಿ ಕೋಟೆ: ಜಮ್ಮು– ಕಾಶ್ಮೀರದ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಬುಧವಾರ (ಫೆ. 3) ಹಿಮಕುಸಿತದಲ್ಲಿ ನಾಪತ್ತೆಯಾದ ಹತ್ತು ಯೋಧರಲ್ಲಿ ರಾಜ್ಯದ ಮೂವರು ಸೇರಿದ್ದಾರೆ.
ಇವರನ್ನು ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿ.ಟಿ. ನಾಗೇಶ್ (41), ಕುಂದಗೋಳ ತಾಲ್ಲೂಕು ಬೆಟದೂರಿನ ಲ್ಯಾನ್ಸ್ನಾಯಕ್ ಹನುಮಂತಪ್ಪ ಕೊಪ್ಪದ ಮತ್ತು ಎಚ್.ಡಿ ಕೋಟೆ ಹಂಪಾಪುರದ ಯೋಧ ಮಹೇಶ (30) ಎಂದು ಗುರುತಿಸಲಾಗಿದೆ.
ಮಡುಗಟ್ಟಿದ ದುಃಖ: ಹಾಸನ ನಗರಕ್ಕೆ ಹೊಂದಿಕೊಂಡ ಪುಟ್ಟ ಹಳ್ಳಿ ತೇಜೂರಿನಲ್ಲಿ ನಾಗೇಶ್ ಅವರ ಪತ್ನಿ ಆಶಾ ಹಾಗೂ ಮಕ್ಕಳಾದ