ನವದೆಹಲಿ: ಗೋವಾದಲ್ಲಿ ವಾರ್ಷಿಕವಾಗಿ ಎರಡು ಕೋಟಿ ಟನ್ಗಳಷ್ಟು ಕಬ್ಬಿಣದ ಅದಿರು ತೆಗೆಯುವುದಕ್ಕೆ ಸುಪ್ರೀಂಕೋರ್ಟ್್ ಸೋಮವಾರ ಅನುಮತಿ ನೀಡಿದೆ.
‘ಈ ಬಗ್ಗೆ ತಜ್ಞರ ಸಮಿತಿಯು ಇನ್ನು ಆರು ತಿಂಗಳಲ್ಲಿ ಅಂತಿಮ ಶಿಫಾರಸು ನೀಡಲಿದೆ’ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್್, ಎಸ್.ಎಸ್.ನಿಜ್ಜರ್್ ಹಾಗೂ ಎಫ್.ಎಮ್.ಐ ಕಲೀಫುಲ್ಲಾ ಅವರನ್ನೊಳಗೊಂಡ ಪೀಠ ಹೇಳಿತು.
ಸುಮಾರು ಒಂದೂವರೆ ವರ್ಷಗಳಿಂದ ಗೋವಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು.
‘1962ರಿಂದ ನೀಡಿದ್ದ ಗಣಿ ಗುತ್ತಿಗೆ ಪರವಾನಗಿ 2007ರ ನಂತರವೂ ನವೀಕರಣವಾಗಿದೆ ಎಂದು ಭಾವಿಸಬಾರದು. ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಧಾಮಗಳ ಸುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿ ಗುತ್ತಿಗೆಗೆ ಅವಕಾಶವಿಲ್ಲ’ ಎಂದೂ ಪೀಠ ಹೇಳಿದೆ.
ಇನ್ನು ಆರು ತಿಂಗಳಿನೊಳಗೆ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ‘ಪರಿಸರ ಸೂಕ್ಷ್ಮ’ ಪ್ರದೇಶಗಳನ್ನು ಗುರುತಿಸುವಂತೆ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಕೋರ್ಟ್್ ಸೂಚಿಸಿದೆ.