'ನಮ್ಮನ್ನು ಯಾರಾದರು ಪ್ರಶ್ನಿಸಿದರೆ, ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ರಾಜ್ಯದ ಜನತೆ, ಚುನಾವಣಾ ಆಯೋಗ ಹಾಗೂ ಭದ್ರತಾ ಪಡೆಗಳು ಅವಕಾಶ ನೀಡಿದವು ಎಂದೇ ನಾವು ಹೇಳಬೇಕಾಗುತ್ತದೆ. ವಿಧಾನಸಭೆ ಆಗಿರಲಿ ಅಥವಾ ಲೋಕಸಭೆ ಚುನಾವಣೆ ಆಗಿರಲಿ ಅವರು ಶ್ರದ್ಧೆ ಹಾಗೂ ಉತ್ಸಾಹದಿಂದ ಸುದೀರ್ಘ ಪ್ರಜಾತಾಂತ್ರಿಕ ಪ್ರಕ್ರಿಯೆಯ ಯಶಸ್ಸಿಗೆ ಶ್ರಮಿಸುತ್ತಾರೆ' ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಸುದ್ದಿಗಾರರಿಗೆ ತಿಳಿಸಿದರು.