ಬೆಂಗಳೂರು: ನಗರದ ಶೇಷಾದ್ರಿ ರಸ್ತೆಯ ಸುಬ್ಬಣ್ಣ ವೃತ್ತದಿಂದ ಆನಂದರಾವ್ ವೃತ್ತದವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಬುಧವಾರದಿಂದ ಜಾರಿಗೆ ತಂದಿದ್ದಾರೆ.
ಗಾಂಧಿನಗರದ 5ನೇ ಮುಖ್ಯರಸ್ತೆಯಿಂದ ರೇಸ್ಕೋರ್ಸ್ ಕಡೆಗೆ ಹೋಗುವ ವಾಹನ ಸವಾರರಿಗೆ ನೇರ ಸಂಚಾರ ವ್ಯವಸ್ಥೆ ನಿಷೇಧಿಸಲಾಗಿದೆ. ಹಾಗಾಗಿ ಎಸ್.ಸಿ. ರಸ್ತೆ ಕಡೆಗೆ ಹೋಗುವ ವಾಹನಗಳು ಸುಬ್ಬಣ್ಣ ವೃತ್ತದಲ್ಲಿ ಎಡ ತಿರುವು ಪಡೆದು, ಶೇಷಾದ್ರಿ ರಸ್ತೆಯ ಎಡ ಪಥದಲ್ಲಿ ಸಂಚರಿಸಿ, ಆನಂದರಾವ್ ವೃತ್ತದಲ್ಲಿ ಎಡ ತಿರುವು ಪಡೆದು, ಎಸ್.ಸಿ. ರಸ್ತೆ ತಲುಪಬೇಕು.
ಅಂತೆಯೇ, ಕಿನೊ ಕಡೆಗೆ ಹೋಗುವ ವಾಹನಗಳು ಸುಬ್ಬಣ್ಣ ವೃತ್ತದಲ್ಲಿ ಎಡ ತಿರುವು ಪಡೆದು, ಶೇಷಾದ್ರಿ ರಸ್ತೆಯ ಎಡಪಥದಲ್ಲಿ ಚಲಿಸಿ, ಆನಂದರಾವ್ ವೃತ್ತದಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.