ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್ ಪ್ರಭುಗೆ ರಾಜ್ಯಸಭೆ ಟಿಕೆಟ್

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕೇಂದ್ರ ಸಚಿವ­ರಾದ ಬೀರೇಂದರ್‌ ಸಿಂಗ್ ಮತ್ತು ಸುರೇಶ್‌ ಪ್ರಭು ಅವರಿಗೆ ಹರಿಯಾ­ಣ­­ದಿಂದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಟಿಕೆಟ್ ನೀಡಿದೆ.

ಅಕ್ಟೋಬರ್ 27ರಂದು ಸಂಪುಟ ವಿಸ್ತರಣೆಯಾದಾಗ ಈ ಇಬ್ಬರೂ ಸಂಸ­ತ್ತಿನ  ಸದಸ್ಯರಾಗಿರಲಿಲ್ಲ. ಹರಿ­ಯಾ­­ಣ­ದಲ್ಲಿ ಇತ್ತೀಚೆಗೆ ನಡೆದ ವಿಧಾನ­ಸಭಾ ಚುನಾವಣೆ­ಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಆದ್ದರಿಂದ ಇಬ್ಬರಿಗೆ ಟಿಕೆಟ್ ನೀಡಿ­ರುವುದಕ್ಕೆ  ಯಾವುದೇ ವಿರೋಧ­ ವ್ಯಕ್ತ­­ವಾಗಿಲ್ಲ. ರಾಜ್ಯಸಭೆ­ಯಲ್ಲಿ  ಬಿಜೆಪಿ ಬಹುಮತ ಹೊಂದಿಲ್ಲ­ದಿ­ದ್ದರೂ ಇವರ ಆಯ್ಕೆಯಾದರೆ ಪಕ್ಷದ ಬಲ ಹೆಚ್ಚಲಿದೆ.

ಸದ್ಯ 43 ಬಿಜೆಪಿ ಸದಸ್ಯರು ರಾಜ್ಯಸಭೆ­ಯಲ್ಲಿದ್ದಾರೆ. ಈ ಮೊದಲು ಬೀರೇಂ­ದರ್ ಸಿಂಗ್ ಅವರು ರಾಜ್ಯಸಭೆಗೆ ಹರಿಯಾಣ­ದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾ­ಗಿದ್ದರು. ಆನಂತರ ಅವರು ಪಕ್ಷ ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT