ಗೋಲಗುಂಬಜ್ ಹಾಗೂ ಬಸವ ಎಕ್್ಸಪ್ರೆಸ್ ರೈಲುಗಳು ರಾಜಧಾನಿಯಿಂದ ಬಾಗಲಕೋಟೆ, ವಿಜಯಪುರ ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತಿವೆ (15ರಿಂದ 17 ಗಂಟೆ). ಇವುಗಳ ಬದಲು ಒಂದು ಹೊಸ ಸೂಪರ್ಫಾಸ್ಟ್ ರೈಲನ್ನು ಯಶವಂತಪುರದಿಂದ ವಿಜಯಪುರಕ್ಕೆ ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು.
ಸದ್ಯ ಈ ಮಾರ್ಗದಲ್ಲಿ ವಾರಕ್ಕೊಮ್ಮೆ ಮೈಸೂರು– ಶಿರಡಿ ರೈಲು ಇದ್ದು, ಇಲ್ಲಿ ಇನ್ನೊಂದು ಸೂಪರ್ಫಾಸ್ಟ್ ರೈಲು ಅತ್ಯವಶ್ಯಕ. ಐತಿಹಾಸಿಕ ಸ್ಥಳಗಳಾದ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ, ಆನೆಗೊಂದಿ ಇವೆಲ್ಲ ಇರುವುದರಿಂದ ಈ ಮಾರ್ಗ ಅತ್ಯಂತ ಸೂಕ್ತ. ಜೊತೆಗೆ ಯಶವಂತಪುರ– ವಿಜಯಪುರ (675 ಕಿ.ಮೀ.) ಅತ್ಯಂತ ಸಮೀಪವಾದ ಮಾರ್ಗವೂ ಆಗಿದೆ.