ಕೇರಳ ಹೈಕೋಟ್ನ ವಿಶೇಷ ಪೀಠದ ನ್ಯಾಯಾಧೀಶರಾದ ಕೆ.ಟಿ ಶಂಕರನ್ ಮತ್ತು ಎಂ.ಎಲ್. ಜೋಸೆಪ್ ಫ್ರಾನ್ಸಿಸ್ ಅವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿ ಈ ತೀರ್ಪು ಪ್ರಕಟಿಸಿದರು.
ಕಳೆದ 18 ವರ್ಷಗಳ ಹಿಂದೆ ಸೂರ್ಯನೆಲ್ಲಿಯ ಅಪ್ರಾಪ್ತ ಬಾಲಕಿಯ ಮೇಲೆ 40 ಜನರು ಅತ್ಯಾಚಾರ ಎಸಗಿದ್ದರು. ಇವರಲ್ಲಿ 36 ಜನರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿತ್ತು. ಐವರು ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಸೂಕ್ತ ಸಾಕ್ಷಿಗಳಿಲ್ಲದೆ ಏಳು ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.
ಉಳಿದ 24 ಆರೋಪಿಗಳಲ್ಲಿ ಧರ್ಮರಾಜನ್, ರಾಜು, ಉಷಾ ಅವರಿಗೆ ಜೀವಾವಧಿ ಶಿಕ್ಷೆ ನೀಡಿದರೆ ಉಳಿದ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.
ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ಥೆಗೆ ಈಗ 36 ವರ್ಷಗಳು.