ಇನ್ನೂ ಮಳೆಗಾಲ ಮುಗಿದಿಲ್ಲ, ಚಳಿಗಾಲ ಆರಂಭವಾಗಿಲ್ಲ, ಆಗಲೇ ನಾಡು ಹಿಮದ ಚಾದರ ಹೊದ್ದು ಮಲಗಿಬಿಟ್ಟಿದೆ ಎಂದು ಈ ಚಿತ್ರ ನೋಡಿ ಲೆಕ್ಕ ಹಾಕಿದಿರಾ? ಸ್ವಲ್ಪ ನಿಲ್ಲಿ, ಇದು ಚಳಿಗಾಲದ ಭ್ರಮೆ ಹುಟ್ಟಿಸಿದ ಮಳೆಗಾಲದ ಕೊನೆಯ ದಿನಗಳ ಸನ್ನಿವೇಶ. ಕಾರ್ಕಳ ತಾಲ್ಲೂಕಿನ ವರಂಗ ಗ್ರಾಮದ ಹೊಂಬುಜ ಜೈನ ಮಠದ ಶಾಖಾ ಮಠದ ಸಮೀಪ ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಕಾಣಿಸಿದ ದೃಶ್ಯ ಇದು. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ