ತಿರುವನಂತಪುರ (ಪಿಟಿಐ): ಭಾರತದ ಮೊತ್ತ ಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳಯಾನ’ ಯೋಜನೆಯಂತೆ ಸಾಗುತ್ತಿದ್ದು ಕಕ್ಷೆಗಾಮಿಯು ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆಯನ್ನು ಸೇರಲಿದೆ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ತಿಳಿಸಿದ್ದಾರೆ.
ಈ ಬಗ್ಗೆ ವ್ಯಕ್ತವಾಗಿದ್ದ ಅನುಮಾನಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಮಂಗಳಯಾನ ಯೋಜನೆಯಂತೆ ಸಾಗುತ್ತಿದೆ. ಸೆಪ್ಟೆಂಬರ್ 24ರಂದು ಅದು ಮಂಗಳನ ಕಕ್ಷೆಗೆ ಸೇರಲಿದೆ ಎಂದು ತಿಳಿಸಿದರು.