ಮಾಣೆಕ್್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೇನೆ ಉಪಮುಖ್ಯಸ್ಥ ಲೆ.ಜನರಲ್್ ಎಂ.ಎಲ್್.ನಾಯ್ಡು ಅವರಿಗೆ ಸೂಚಿಸಿದ್ದರು. ರಕ್ಷಣಾ ಸಚಿವ ಎ.ಕೆ.ಆಂಟನಿ, ಪ್ರಧಾನಿ ಮನಮೋಹನ್ಸಿಂಗ್, ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್್ ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಆಗ ರಕ್ಷಣಾ ಖಾತೆ ರಾಜ್ಯ ಸಚಿವರಾಗಿದ್ದ ಎಂ.ಎಂ.ಪಲ್ಲಂ ರಾಜು ಸರ್ಕಾರದ ಪರವಾಗಿ ಮಾಣೆಕ್್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
‘ಮಾಣೆಕ್್ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಕಾರಣ ಆಂಟನಿ ಹಾಗೂ ಕಪೂರ್್ ತೀವ್ರ ಟೀಕೆಗೆ ಒಳಗಾಗಬೇಕಾಯಿತು. ಸೌತ್್ ಬ್ಲಾಕ್್ ಹೊರಗಿರುವ ಸೇನಾ ಧ್ವಜ ಕೂಡ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ’ ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.
1914ರ ಏಪ್ರಿಲ್್ 3ರಂದು ಅಮೃತಸರದಲ್ಲಿ ಜನಿಸಿದ ಮಾಣೆಕ್್ ಷಾ, ಫೀಲ್ಡ್್ ಮಾರ್ಷಲ್್ ಗೌರವ ಪಡೆದ
ಭಾರತದ ಮೊದಲ ಸೇನಾಧಿಕಾರಿ. 2008ರ ಜೂನ್್ 27ರಂದು ತಮ್ಮ 94ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು.
1971ರಲ್ಲಿ ಪಾಕ್ ಜತೆಗಿನ ಯುದ್ಧದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದ್ದರ ಹಿಂದೆ ಮಾಣೆಕ್್ ಪರಿಶ್ರಮ ಇತ್ತು.