ಪ್ರಧಾನಿ ನರೇಂದ್ರ ಮೋದಿ ಇದೀಗ ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸುತ್ತಿದ್ದಾರೆ. ಹೂಡಿಕೆ ಅಗತ್ಯ. ಆದರೆ ಕಳೆದ ಎರಡು ದಶಕಗಳಿಂದ ನಿರಂತರವಾಗಿ ನಡೆದೇ ಇರುವ ರೈತರ ಆತ್ಮಹತ್ಯೆ ತಡೆಗೆ ಇವರ ಸರ್ಕಾರದ ನಡೆ–ನಿಲುವು ಏನು ಎಂಬುದೇ ಸ್ಪಷ್ಟವಾಗುತ್ತಿಲ್ಲ!
ಅಧಿಕಾರ ಹಿಡಿದು ನೂರು ದಿನಗಳಾದರೂ ಮೋದಿ ಬರೀ ವ್ಯಾಪಾರಿ ಉದ್ದಿಮೆದಾರರ ಹಿತರಕ್ಷಣೆಗೆ ಕಾಳಜಿ ತೋರುತ್ತಿದ್ದಾರೆಯೇ ಹೊರತು ರೈತರ ಯೋಗಕ್ಷೇಮದ ಬಗ್ಗೆ ಏನನ್ನೂ ಮಾಡುತ್ತಿಲ್ಲ. ವಿದೇಶಿ ಬಂಡವಾಳಕ್ಕಷ್ಟೆ ಆದ್ಯತೆ ನೀಡಿದರೆ ನಮ್ಮ ಸ್ವದೇಶಿ ಮೌಲ್ಯದ ಗತಿ ಏನು?