ನವದೆಹಲಿ (ಪಿಟಿಐ): ಸೇವಾ ಹಿರಿತನ ಕಡೆಗಣಿಸಿ ನೌಕಾಪಡೆಯ ಮುಖ್ಯಸ್ಥರನ್ನಾಗಿ ಆರ್.ಕೆ. ಧವನ್ ಅವರನ್ನು ನೇಮಕ ಮಾಡಿರುವುದರಿಂದ ತೀವ್ರ ನೊಂದಿರುವ ಪಶ್ಚಿಮ ಭಾಗದ ಕಮಾಂಡರ್ ವೈಸ್ ಅಡ್ಮಿರಲ್ ಶೇಖರ್ ಸಿನ್ಹಾ ಅವರು ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ.
ನೌಕಾ ದಳದ ಮುಖ್ಯಸ್ಥರಾಗಿ ಆರ್.ಕೆ. ಧವನ್ ಅಧಿಕಾರವಹಿಸಿಕೊಂಡಿರುವ ಧವನ್ ಅವರಿಗಿಂತ ಸಿನ್ಹಾ ಸೇವೆಯಲ್ಲಿ ಆರು ತಿಂಗಳು ಹಿರಿಯರು. ಇದೇ ಆಗಸ್ಟ್ 31ಕ್ಕೆ ಸಿನ್ಹಾ ನಿವೃತ್ತಿಯಾಗುತ್ತಿದ್ದಾರೆ. ಸ್ವಯಂ ನಿವೃತ್ತಿ ಕೊಡಿ ಇಲ್ಲವೇ ನ್ಯಾಯ ಒದಗಿಸಿ ಎಂದು ಕೋರಿ ಸಿನ್ಹಾ
ಅವರು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೆ ಪತ್ರ ಬರೆದಿದ್ದು ಈ ಕೂಡಲೇ ಸೇವೆಯಿಂದ ಬಿಡುಗಡೆ ಮಾಡಲು ಕೋರಿದ್ದಾರೆ.
ನೌಕಾ ದಳದಲ್ಲಿ ನಿರಂತರವಾಗಿ ನಡೆದ ದುರಂತಗಳ ಹೊಣೆ ಹೊತ್ತು ಅಡ್ಮಿರಲ್ ಡಿ.ಕೆ. ಜೋಶಿ ರಾಜೀನಾಮೆ ನೀಡಿದ ಎರಡು ತಿಂಗಳ ನಂತರ ಸರ್ಕಾರ ಧವನ್ ಅವರನ್ನು ಈ ಹುದ್ದೆಗೆ ನೇಮಿಸಿದೆ.