ಡೆಹ್ರಾಡೂನ್ (ಪಿಟಿಐ): ಆನಂದವನ ಆಶ್ರಮದ ಸಂಸ್ಥಾಪಕ, ಹಿರಿಯ ಸಂಸ್ಕೃತ ವಿದ್ವಾಂಸ ಸ್ವಾಮಿ ಕಾಸಿಕಾನಂದ ಗಿರಿ (90) ಶುಕ್ರವಾರ ನಿಧನ ಹೊಂದಿದರು. ಅವರ ದೇಹವನ್ನು ಶನಿವಾರ ಹರಿದ್ವಾರದಲ್ಲಿ ಜಲಸಮಾಧಿ ಮಾಡಲಾಗುವುದು.
ಕೇರಳದ ಪಾಲ್ಘಾಟ್ನ ಚೆರ್ಪುಲಸ್ಸರಿಯಲ್ಲಿ 1924ರಂದು ಜನಿಸಿದ ಸ್ವಾಮಿ ಕಾಸಿಕಾನಂದ ಅವರು 15ನೇ ವಯಸ್ಸಿನಿಂದಲೇ ಅಧ್ಯಾತ್ಮದಲ್ಲಿ ತೊಡಗಿಸಿಕೊಂಡರು. ಕಾಶಿಯದಕ್ಷಿಣ ಮೂರ್ತಿ ಆಶ್ರಮದಲ್ಲಿ ನರಸಿಂಹ ಗಿರಿ ಅವರಿಂದ ಸನ್ಯಾಸತ್ವ ಸ್ವೀಕರಿಸಿದರು. ಬಳಿಕ ವಾರಾಣಸಿಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂಬ ಹೆಸರು ಪಡೆದರು.