ಬೆಂಗಳೂರು: ‘ನಗರದ ಪರ್ಲ್ಸ್ ಅಗ್ರೋಟೆಕ್ ಕಾರ್ಪೊರೇಷನ್ ಕಂಪೆನಿ (ಪಿಎಸಿಎಲ್) ತನ್ನ ಪ್ರತಿನಿಧಿಗಳ ಮೂಲಕ ಗ್ರಾಹಕರಿಂದ ಪಾಲಿಸಿ ರೂಪದಲ್ಲಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಯನ್ನು ಹಿಂದಿರುಗಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ್ಯ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿನಿಧಿಗಳನ್ನು ನಂಬಿ ಜನ ಹಣ್ನು ಕಟ್ಟಿದ್ದು, ಕಂಪೆನಿ ಹಣ ನೀಡದ ಕಾರಣ ಗ್ರಾಹಕರು ಹಣಕ್ಕಾಗಿ ಪ್ರತಿನಿಧಿಗಳ ದುಂಬಾಲು ಬಿದ್ದಿದ್ದಾರೆ’ ಎಂದರು.
‘ಗ್ರಾಹಕರಿಗೆ ಹಣ ವಸೂಲಿ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ಸೆ.22 ರಂದು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಪಿಇಸಿಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತವೆ’ ಎಂದರು.