ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಾಪಸ್‌ಗೆ ಕೋಡಿಹಳ್ಳಿ ಒತ್ತಾಯ

Last Updated 15 ಸೆಪ್ಟೆಂಬರ್ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಪರ್ಲ್ಸ್‌ ಅಗ್ರೋಟೆಕ್‌ ಕಾರ್ಪೊರೇಷನ್‌ ಕಂಪೆನಿ (ಪಿಎಸಿಎಲ್‌)  ತನ್ನ ಪ್ರತಿನಿಧಿಗಳ ಮೂಲಕ ಗ್ರಾಹಕರಿಂದ ಪಾಲಿಸಿ ರೂಪ­ದಲ್ಲಿ ಸಂಗ್ರಹಿಸಿದ  ಕೋಟ್ಯಂತರ ರೂಪಾಯಿಯನ್ನು ಹಿಂದಿರುಗಿಸ­ಬೇಕು’ ಎಂದು ಕರ್ನಾಟಕ ರಾಜ್ಯ ರೈತ್ಯ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿ­ಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿನಿಧಿಗಳನ್ನು ನಂಬಿ ಜನ ಹಣ್ನು ಕಟ್ಟಿದ್ದು, ಕಂಪೆನಿ ಹಣ ನೀಡದ ಕಾರಣ  ಗ್ರಾಹಕರು ಹಣಕ್ಕಾಗಿ ಪ್ರತಿನಿಧಿಗಳ ದುಂಬಾಲು ಬಿದ್ದಿದ್ದಾರೆ’ ಎಂದರು.

‘ಗ್ರಾಹಕರಿಗೆ ಹಣ ವಸೂಲಿ ಮಾಡಿ­ಕೊಡುವಂತೆ  ಸರ್ಕಾರಕ್ಕೆ ಮನವಿ ಮಾಡಿ­ದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ಸೆ.22 ರಂದು ಕನ್ನಿಂಗ್‌ ಹ್ಯಾಂ ರಸ್ತೆ­ಯಲ್ಲಿರುವ ಪಿಇಸಿಎಲ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT