ಜನರ ಧ್ವನಿಯಾಗಿ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಲು ಪತ್ರಕರ್ತರು ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರಿಸಿ ಜೀವನ ನಡೆಸುತ್ತಾರೆ. ಆದರೆ ಇಂದು ಅವರ ಬದುಕಿಗೇ ಅಪಾಯ ಎದುರಾಗುತ್ತಿದೆ.
ದೇಶದಲ್ಲಿ ಪತ್ರಕರ್ತರ ಹತ್ಯೆಗಳು ಹೆಚ್ಚಾಗುತ್ತಿದ್ದು ಹಾಡಹಗಲೇ ಅಮಾನುಷವಾಗಿ ಕೊಲೆಗಳು ನಡೆಯುತ್ತಿವೆ. ಇದನ್ನು ತಡೆಯಲು ಸರ್ಕಾರ ಮುಂದಾಗದಿದ್ದರೆ ನ್ಯಾಯಕ್ಕೆ ಸೋಲುಂಟಾಗುತ್ತದೆ.