ಬೆಂಗಳೂರು: ಗಾಯಗೊಂಡು ಮೆಟ್ರೊ ಹಳಿಗಳ ಮೇಲೆ ಬಿದ್ದಿದ್ದ ಹದ್ದೊಂದನ್ನು ಮೆಟ್ರೊ ಚಾಲಕ ರಕ್ಷಿಸಿದ ಘಟನೆ ಯಶವಂತಪುರ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ 8.45ರ ಸಮಯದಲ್ಲಿ ನಡೆದಿದೆ.
ಜೋಡಿ ಮಾರ್ಗದ ಹಳಿಗಳ ನಡುವಣ ‘ಥರ್ಡ್ ರೈಲ್’ನಲ್ಲಿ ಸದಾ ಅಧಿಕ ವೋಲ್ಟೇಜ್ ವಿದ್ಯುತ್ ಪ್ರವಹಿಸುತ್ತಿರುತ್ತದೆ. ‘ಥರ್ಡ್ ರೈಲ್’ ಅನ್ನು ಸ್ಪರ್ಶಿಸಿದ್ದಿದ್ದರೆ ಹದ್ದು ಸಾವನ್ನಪ್ಪುವ ಸಾಧ್ಯತೆ ಇತ್ತು.
ಹದ್ದನ್ನು ಗಮನಿಸಿದ ಮೆಟ್ರೊ ಚಾಲಕ ಶಾಂತಿರಾಜ್ ಕೂಡಲೇ ನಿಯಂತ್ರಣ ಕೇಂದ್ರಕ್ಕೆ ಕರೆ ಮಾಡಿ ವಿಷಯ ತಿಳಿಸಿದರು. ನಂತರ ವಿದ್ಯುತ್ ಸ್ಥಗಿತಗೊಳಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹದ್ದನ್ನು ರಕ್ಷಿಸಿದರು.