ದೇವಾಲಯಕ್ಕೆ ಸಾಕ್ಷಾತ್ ಪರಶಿವನೇ ಅದೃಶ್ಯ ರೂಪದಲ್ಲಿ ಬಂದು ಶಿಖರಕ್ಕೆ ಮುಂಡಾಸ್ ಸುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ. ಮುಂಡಾಸ್ ಯಾವ ಕಡೆ ವಾಲಿದೆಯೋ, ಯಾವ ಕಡೆಗೆ ಹೆಚ್ಚು ಜೋತು ಬಿದ್ದಿದೆಯೊ, ಯಾವ ಕಡೆಗೆ ಬಿಗಿಯಾಗಿ ಬಂಧಿಸಿದೆ ಎಂಬುದರ ಲೆಕ್ಕಾಚಾರದಿಂದ ಭಕ್ತರು ಮಳೆ, ಬೆಳೆ, ಸಮೃದ್ಧಿ, ಶಾಂತಿ ಹಾಗೂ ರಾಜಕೀಯ ವಿಶ್ಲೇಷಣೆ ಮಾಡುವುದು ಇಲ್ಲಿಗೆ ಬಂದ ಭಕ್ತರ ತರ್ಕಕ್ಕೆ ಬಿಟ್ಟಿದ್ದು.
ಇನ್ನು, ಜಾತ್ರೆಯಲ್ಲಿ ಮರಾಠಿ ತಮಾಷಾ, ಡೊಳ್ಳು ಕುಣಿತ, ಸರ್ಕಸ್, ನಾಟಕ ಸೇರಿದಂತೆ ಹಲವು ಬಗೆಯ ಮನರಂಜನೆಗಳು ಜಾತ್ರೆಯ ಆಕರ್ಷಣೆ ಹೆಚ್ಚಿಸಿವ.