ಅಕ್ಕರೈ ಸಹೋದರಿಯರಾದ ಎಸ್ ಸುಬ್ಬುಲಕ್ಷ್ಮಿ ಮತ್ತು ಎಸ್. ಸ್ವರಣಲತಾ, ವಯಲಿನ್ ಯುಗಳ ಗೋಷ್ಠಿ ಮೂಲಕ ಕಾರ್ಯಕ್ರಮ ಆರಂಭವಾಯಿತು. ಎರಡನೇ ದಿನ, ಪದ್ಮಭೂಷಣ ಟಿ.ವಿ. ಶಂಕರನಾರಾಯಣನ್ ಅವರ ‘ಸ್ವರ ಪ್ರಸ್ತಾರ’ ಪ್ರೇಕ್ಷಕರ ಮನರಂಜಿಸಿತು. ಇನ್ನೊಂದು ವಿಶಿಷ್ಟ ಪ್ರದರ್ಶನವೆಂದರೆ ಗೌರಿ ನಿರ್ದೇಶನ ‘ಫೈರ್ ಮತ್ತು ಆ್ಯಶ್’. ನೃತ್ಯ, ಸಂಗೀತ, ಕವನ ಮತ್ತು ಚಿತ್ರಕಲೆಗಳನ್ನು ಮಿಶ್ರಗೊಳಿಸಿ ರೂಪಿಸಲಾದ ಈ ಪ್ರದರ್ಶನವು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
22 ವರ್ಷದ ಉತ್ಸವ ಲಾಲ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪಿಯಾನೊ ಮೂಲಕ ನುಡಿಸಿದರು. ನಾಲ್ಕನೇ ದಿನ. ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ಐದನೇ ದಿನ ಮೈಸೂರು ಎಂ. ನಾಗರಾಜ್, ಮೈಸೂರು ಎಂ, ಮಂಜುನಾಥ್, ವಯಲಿನ್ ಯುಗಳ ಪ್ರದರ್ಶನ ನೀಡಿದರು.
ಅಂತಿಮ ದಿನ ಅಮೃತಾ ವೆಂಕಟೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಇಂದಿರನಗರ ಸಂಗೀತ ಸಭಾ ನೀಡಿ ಗೌರವಿಸುವ ‘ಪುರಂದರ ಪ್ರಶಸ್ತಿ–2016’ ಪ್ರಶಸ್ತಿಯನ್ನು ಟಿ.ವಿ. ಶಂಕರನಾರಾಯಣನ್ ಅವರಿಗೆ ನೀಡಿ ಗೌರವಿಸಲಾಯಿತು. ‘ಯುವ ಪುರಂದರ ಪ್ರಶಸ್ತಿ 2016’ ಪ್ರಶಸ್ತಿಯನ್ನು ಅಮೃತಾ ವೆಂಕಟೇಶ್ ಕರ್ನಾಟಕ ಸಂಗೀತ - ಗಾಯನ ವಿಭಾಗದಲ್ಲಿ ಮತ್ತು ಎಸ್ ಶುಭಾಲಕ್ಷ್ಮಿ, ಎಸ್. ಸ್ವರಣಲತಾ, ಕರ್ನಾಟಕ ಸಂಗೀತ– ವಯಲಿನ್ ವಿಭಾಗದಿಂದ ಪಡೆದರು.