ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಲಾಲು ಪ್ರಸಾದ್ಗೆ ತಲೆ ಕೆಟ್ಟಿದೆ. ಹಿಂದೂಗಳು ಗೋವಿನ ರಕ್ಷಣೆಗೆ ನಿಲ್ಲುತ್ತಾರೆಯೇ ಹೊರತು, ತಿನ್ನುವುದಿಲ್ಲ. ಈ ಹೇಳಿಕೆ ಹಿಂಪಡೆಯದಿದ್ದರೆ ಲಾಲು ಮನೆ ಮುಂದೆ ಧರಣಿ ನಡೆಸುತ್ತೇನೆ’ ಎಂದು ಕಿಡಿಕಾರಿದ್ದಾರೆ.
ಕಾಟ್ಜು ಹೇಳಿಕೆ: ಗೋಮಾಂಸ ಸೇವನೆ ವದಂತಿಯಿಂದ ವಿವಾದ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಮಾರ್ಕಂಡೇಯ ಕಾಟ್ಜು, ಹಸು ಕೇವಲ ಒಂದು ಪ್ರಾಣಿ, ಅದು ಯಾರ ತಾಯಿಯೂ ಅಲ್ಲ ಎಂದು ಹೇಳಿದ್ದಾರೆ.