ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗನಾಥ ದೇವಾಲಯದಲ್ಲಿ ಗುರುವಾರ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿಗಳ ಹಣ ಎಣಿಕೆ ನಡೆುತು. ಹುಂಡಿಯಲ್ಲಿ 4 ತಿಂಗಳು 12 ದಿನಗಳ ಅವಧಿಯಲ್ಲಿ ₹ 8.83 ಲಕ್ಷ ನಗದು, 3.5 ಗ್ರಾಂ ಚಿನ್ನ ಹಾಗೂ 5 ಗ್ರಾಂ ಬೆಳ್ಳಿ ದೊರೆತಿದೆ.
ದೇವಾಲಯದ ಆವರಣದಲ್ಲಿ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನ ಮೀನಾಕ್ಷಿ ದೇವಾಲಯ, ರಂಗನಾಥಸ್ವಾಮಿ ದೇವಾಲಯಗಳ ಹುಂಡಿಗಳ ಎಣಿಕೆ ನಡೆಯಿತು. ಕಂದಾಯ ಇಲಾಖೆ, ಮುಜರಾಯಿ ಇಲಾಖೆ, ಬ್ಯಾಂಕ್ ಸಿಬ್ಬಂದಿಯಿಂದ ಹಾಗೂ ಪೊಲೀಸರು ಇದ್ದರು.
ತಹಶೀಲ್ದಾರ್ ಸಿ. ಮಹಾದೇವಯ್ಯ, ಪಾಳ್ಯ ಹೋಬಳಿ ಪ್ರಭಾರ ಉಪ ತಹಶೀಲ್ದಾರ್ ಪರಮೆಶ್, ಸಮೂಹ ದೇವಾಲಯಗಳ ಪ್ರಭಾರ ಕಾರ್ಯನಿರ್ವಹ ಣಾಧಿಕಾರಿ ಎನ್. ಸುರೇಶ್, ವೈಶ್ಯಾಬ್ಯಾಂಕಿನ ರಾಮು, ಆರ್.ಐ. ವೆಂಕಟರಮಣಸ್ವಾಮಿ, ರಾಮಚಂದ್ರ, ಪ್ರದೀಪ್, ಸುಂದ್ರೇಶ್, ಸತೀಶ್, ಜಯರಾಂ, ಉಪವಿಭಾಗಾಧಿಕಾರಿ ಕಚೇರಿ ಶಿವಮಲ್ಲಪ್ಪ ಹುಂಡಿ ಎಣಿಕೆ ಮಾಡಿದರು.