ಹುಬ್ಬಳ್ಳಿ: ಯಶವಂತಪುರದಿಂದ ಮುಂಬೈನ ದಾದರ್ಗೆ ಹೊರಟ್ಟಿದ್ದ ‘ಚಾಲುಕ್ಯ ಎಕ್ಸ್ಪ್ರೆಸ್’ ರೈಲು ಇಲ್ಲಿನ ಉಣಕಲ್ ನಿಲ್ದಾಣದ ಬಳಿ ಹಳಿತಪ್ಪಿದ ಘಟನೆ ಸೋಮವಾರ ನಡೆದಿದೆ.
ಮಧ್ಯಾಹ್ನ 3.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ರೈಲಿನ ಎಂಜಿನ್ ಹಾಗೂ ಮೂರು ಬೋಗಿಗಳಿಗೆ ಹಾನಿಯಾಗಿದೆ.
ತಪ್ಪು ಸಿಗ್ನಲಿಂಗ್ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳು ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಪರ್ಯಾಯ ವ್ಯವಸ್ಥೆ ಇಲ್ಲ: ರೈಲು ಹಳಿತಪ್ಪಿದ್ದರಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿಲ್ಲ. ಇದರಿಂದ ದೂರದ ಊರುಗಳಿಗೆ ತೆರಳಬೇಕಿರುವ ಪ್ರಯಾಣಿಕರಿಗೆ ತೊಂದರೆಯಾಗಿದೆ.
ತಪ್ಪಿದ ಅನಾಹುತ: ಘಟನಾ ಸಮಯದಲ್ಲಿ ಎದುರಿನಿಂದ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಬರುತ್ತಿತ್ತು. ಅದು ಕೂಡ ಚಾಲುಕ್ಯ ಎಕ್ಸ್ಪ್ರೆಸ್ ರೈಲು ಬರುತ್ತಿದ್ದ ಹಳಿಗೆ ಬಂದು ಸೇರಬೇಕಿತ್ತು. ಆದರೆ, ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.