ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಂರಕ್ಷಣೆಗೆ ಬಿಗ್ ಬಿ ಮನವಿ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಹುಲಿಗಳ ರಾಯಭಾರಿಯಾಗಿ ಆಯ್ಕೆಯಾದ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌, ‘ನಶಿಸುತ್ತಿರುವ ಹುಲಿಗಳನ್ನು ಸಂರಕ್ಷಿಸಬೇಕು’ ಎಂದು  ಜನರಲ್ಲಿ ಮನವಿ ಮಾಡಿದ್ದಾರೆ.

ರಾಯಭಾರಿಯಾಗಿ ಆಯ್ಕೆಯಾದ ಮೊದಲ ಪ್ರಯತ್ನದಲ್ಲೇ ಮುಂಬೈನ ಸಂಜಯ್‌ ಗಾಂಧಿ ನ್ಯಾಷನಲ್‌ ಪಾರ್ಕ್‌ಗೆ ಸಚಿವರೊಂದಿಗೆ ಬಿಗ್‌ ಬಿ ಸಫಾರಿಗೆ ತೆರಳಿದ್ದರು. 

‘ಹುಲಿ ಸಂರಕ್ಷಣಾ ರಾಯಭಾರಿಯಾಗಿ ಅವುಗಳ ಸಂರಕ್ಷಣೆಯತ್ತ ಹೆಚ್ಚು ಗಮನ ಹರಿಸುವುದು ನನ್ನ ಕರ್ತವ್ಯ’ ಎಂದು ಅವರು ತಿಳಿಸಿದ್ದಾರೆ.

‘ಕಳೆದ 65 ವರ್ಷಗಳಿಂದ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇನೆ. ಈ ಸಫಾರಿ ನನಗೆ ಎಂದೂ ನೋಡದ ಹೊಸ ಲೋಕವನ್ನು ತೋರಿಸಿದೆ ಹಾಗೂ ನಾನು ಇದಕ್ಕಾಗಿ ಕೆಲಸ ಮಾಡುವಂತೆ ಮಾಡಿದೆ. ನಗರದ ಮಧ್ಯೆ ಇರುವ ಈ ಪಾರ್ಕ್‌ ನಿಜಕ್ಕೂ ಒಂದು ಅದ್ಭುತ ಲೋಕವನ್ನು ಸೃಷ್ಟಿಸಿದೆ.

ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಮಹಾರಾಷ್ಟ್ರದಲ್ಲಿವೆ’ ಎಂದು ಅಮಿತಾಭ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT