ಮಹಾರಾಷ್ಟ್ರದ ಹುಲಿಗಳ ರಾಯಭಾರಿಯಾಗಿ ಆಯ್ಕೆಯಾದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ‘ನಶಿಸುತ್ತಿರುವ ಹುಲಿಗಳನ್ನು ಸಂರಕ್ಷಿಸಬೇಕು’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ರಾಯಭಾರಿಯಾಗಿ ಆಯ್ಕೆಯಾದ ಮೊದಲ ಪ್ರಯತ್ನದಲ್ಲೇ ಮುಂಬೈನ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ಗೆ ಸಚಿವರೊಂದಿಗೆ ಬಿಗ್ ಬಿ ಸಫಾರಿಗೆ ತೆರಳಿದ್ದರು.
‘ಹುಲಿ ಸಂರಕ್ಷಣಾ ರಾಯಭಾರಿಯಾಗಿ ಅವುಗಳ ಸಂರಕ್ಷಣೆಯತ್ತ ಹೆಚ್ಚು ಗಮನ ಹರಿಸುವುದು ನನ್ನ ಕರ್ತವ್ಯ’ ಎಂದು ಅವರು ತಿಳಿಸಿದ್ದಾರೆ.
‘ಕಳೆದ 65 ವರ್ಷಗಳಿಂದ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇನೆ. ಈ ಸಫಾರಿ ನನಗೆ ಎಂದೂ ನೋಡದ ಹೊಸ ಲೋಕವನ್ನು ತೋರಿಸಿದೆ ಹಾಗೂ ನಾನು ಇದಕ್ಕಾಗಿ ಕೆಲಸ ಮಾಡುವಂತೆ ಮಾಡಿದೆ. ನಗರದ ಮಧ್ಯೆ ಇರುವ ಈ ಪಾರ್ಕ್ ನಿಜಕ್ಕೂ ಒಂದು ಅದ್ಭುತ ಲೋಕವನ್ನು ಸೃಷ್ಟಿಸಿದೆ.