ಇದೇ ವೇಳೆ, ‘ನಮ್ಮ ಹೋರಾಟದ ದಾರಿ ಸ್ವಲ್ಪ ದೀರ್ಘವಿರಬಹುದು. ನಾವು ಸ್ವಲ್ಪ ಹೆಚ್ಚು ಕೆಲಸ ಮಾಡಬೇಕಾಗಬಹುದು. ಆದರೆ ನಾವೆಲ್ಲರೂ ಶ್ರಮಪಟ್ಟು, ಒಗ್ಗಟ್ಟಾಗಿ ದುಡಿದರೆ ಕಾಂಗ್ರೆಸ್ ಮತ್ತೆ ಉತ್ತುಂಗದ ತುದಿ ತಲುಪುವ ದಿನ ದೂರವಿಲ್ಲ’ ಎನ್ನುವ ಮೂಲಕ ಕಾಂಗ್ರೆಸ್ ಮತ್ತೆ ಎದ್ದು ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.