ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ: ಯಾತ್ರಾರ್ಥಿ ಸಾವು

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

​ಜಮ್ಮು (ಪಿಟಿಐ) : ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದ ಇಬ್ಬರು ಯಾತ್ರಾರ್ಥಿಗಳಿಗೆ ಮಾರ್ಗ ಮಧ್ಯದಲ್ಲಿ ಹೃದ­ಯಾ­ಘಾತ ಸಂಭವಿಸಿ ಮೃತ­ಪಟ್ಟಿ­ರುವ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಮಹಾರಾಷ್ಟ್ರ ಮೂಲದ ಉತ್ತಮ್‌(35), ದೆಹಲಿ ಮೂಲದ ಅನಿಲ್‌ ಕುಮಾರ್‌(40) ಎಂದು ಗುರುತಿಸಲಾಗಿದೆ.

ಉತ್ತಮ್‌ ಅವರು ಮಂಗಳವಾರ ಕಟ್ರಾ ನಗರದಿಂದ  ವೈಷ್ಣೋದೇವಿ ದೇವ­ಸ್ಥಾನಕ್ಕೆ  ತೆರಳುತ್ತಿದ್ದಾಗ ಹೃದಯಾ­ಘಾತ­ದಿಂದ ಮೃತಪಟ್ಟಿದ್ದಾರೆ.   ದೆಹ­ಲಿಯ ಅನಿಲ್‌ಕುಮಾರ್‌ ಅವರಿಗೆ ಕಟ್ರಾದ ಶಿಬಿರದ ಹೋಟೆಲ್‌ ಕೋಣೆ­ಯಲ್ಲಿ ಹೃದಯಘಾತವಾಗಿದೆ.

ತಕ್ಷಣ ಅವ­ರನ್ನು ಆಸ್ಪತ್ರೆಗೆ ದಾಖಲಿಸ­ಲಾಯಿ­ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮಂಗಳ­ವಾರ ರಾತ್ರಿ ಮೃತರಾದರು. ಮೃತ­ದೇಹ­ಗಳನ್ನು ಕುಟುಂಬದವರಿಗೆ ಹಸ್ತಾಂ­ತರಿಸ­ಲಾಗಿದೆ  ಎಂದು ವೈಷ್ಣೋ ದೇವಿ ದೇವಾ­ಲಯ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT