ನಿಜಲಿಂಗಪ್ಪ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಹೊಂದಿದ್ದ ರಾಮಕೃಷ್ಣ ಹೆಗಡೆ ಅವರು ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಲು ಹೊರಟು, ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಿಸಿದ್ದರು.
ಹೆಗಡೆ ಅವರು ಮುಂದಿಟ್ಟ ಪ್ರಸ್ತಾವ ಪಕ್ಷದ ವೇದಿಕೆಯಲ್ಲೇ ತಿರಸ್ಕೃತವಾಗುತ್ತದೆ. ಇದೇ ಕಾರಣಕ್ಕೆ ಖಾತೆಯೂ ಬದಲಾಗುತ್ತದೆ.
ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣಕ್ಕೆ ಕಟಿಬದ್ಧರಾಗಿ ನಿಂತಾಗ, ‘ಇದರ ಬಗ್ಗೆ ನನ್ನ ತಕರಾರು ಏನೂ ಇಲ್ಲ. ಆದರೆ, ನನಗೆ ಬಂದ ಗತಿ ನಿಮಗೂ ಬರಬಾರದು’ ಎಂದು ಎಚ್ಚರಿಸುತ್ತಾರೆ.