ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಹೆಮ್ಮೆಯ ಸಂಗತಿ. ಇವರಲ್ಲಿ ಕಡುಬಡವರ ಮಕ್ಕಳು, ಎಷ್ಟೋ ಕಿ.ಮೀ. ನಡೆದು ಶಾಲೆಗೆ ಹೋಗುತ್ತಿದ್ದವರು, ಮನೆಪಾಠ ಅಥವಾ ವಿಶೇಷ ತರಗತಿಯಂತಹ ವ್ಯವಸ್ಥೆ ಇಲ್ಲದವರು ಸಹ ಅತ್ಯುತ್ತಮ ಅಂಕ ಗಳಿಸಿ ಮಾದರಿಯಾಗಿದ್ದಾರೆ. ಈಗಿನ ‘ಹೈ-ಟೆಕ್’ ಯುಗದಲ್ಲಿ ಈ ವಿದ್ಯಾರ್ಥಿಗಳ ಸಾಧನೆ ಅನುಕರಣೀಯ. ಇನ್ನಾದರೂ ಸರ್ಕಾರ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಧುನಿಕ ಸಲಕರ ಣೆಗಳು, ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶೇಷ ತರಗತಿ ಯಂತಹ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು.
- ಪ್ರಸನ್ನ ಎಚ್. ಹೊಸೂರಕರ್,
ಬೆಂಗಳೂರು