ಬೆಂಗಳೂರು: ನಗರದ ಹದಗೆಟ್ಟ ಪಾದಚಾರಿ ಮಾರ್ಗಗಳ ಸಮಸ್ಯೆ ಕುರಿತಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ, ಬಿಬಿಎಂಪಿ ಶುಕ್ರವಾರದಿಂದ (ಆ.22) ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸುತ್ತಿದೆ.
ಶುಕ್ರವಾರ ರಾಮಕೃಷ್ಣ ನಗರ ಮುಖ್ಯರಸ್ತೆಯಿಂದ ಆರಂಭಗೊಳ್ಳುವ ಈ ಕಾರ್ಯಾಚರಣೆ ಸೆ.3ರವರೆಗೆ ನಗರದ ವಿವಿಧ ವಾರ್ಡ್ಗಳಲ್ಲಿ ಹಂತ ಹಂತವಾಗಿ ನಡೆಯಲಿದೆ. ಈ ಕುರಿತಂತೆ ಪೂರ್ವಭಾವಿಯಾಗಿ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಯುವ ವಾರ್ಡ್ಗಳಲ್ಲಿರುವ ಸಂಬಂಧಪಟ್ಟ ಪಾಲಿಕೆ ಸಿಬ್ಬಂದಿಗೆ ಮಾಹಿತಿ ಕಾರ್ಯಚರಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತು ಸ್ಥಳೀಯ ಪೊಲೀಸರ ನೆರವು ಪಡೆಯುವಂತೆ ಸೂಚಿಸಿದೆ.