ಆಲಮೇಲ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ದೇವರ ಅಗಸಿ ಎದುರಿಗೆ ಕೆಪಿಆರ್ ಶುಗರ್ಸ್ ಕಾರ್ಖಾನೆಯ ವತಿಯಿಂದ ಅಂದಾಜು ₨ 6 ಲಕ್ಷ ಮೊತ್ತದಲ್ಲಿ ಹೈಮ್ಯಾಸ್ಟ್ ದೀಪ ಅಳವಡಿಸುವ ಕಾಮ ಗಾರಿಗೆ ಸೋಮವಾರ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಅಯೂಬ್ ದೇವರಮನಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣಕ್ಕೆ ಬೀದಿ ದೀಪದಂತಹ ಮೂಲಸೌಲಭ್ಯ ಒದಗಿಸಲು ಕೆಪಿಆರ್ ಶುಗರ್ಸ್ ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕೆಪಿಆರ್ ಶುಗರ್ಸ್ ಎಂಜಿನಿಯರ್ ಶ್ರೀಶೈಲ ಮಠಪತಿ, ಪಿಕೆಪಿಎಸ್ ಅಧ್ಯಕ್ಷ ಸಿದ್ಧಲಿಂಗ ಸುಬೇದಾರ, ಮುಖಂಡರಾದ ಗಾಲೀಬ್ ವಡಗೇರಿ, ಲಕ್ಷ್ಮಣ ಗುರಕಾರ, ಅಲ್ಲಾಬಕ್ಷ ಕಡಣಿ ಮತ್ತಿತರರು ಉಪಸ್ಥಿತರಿದ್ದರು.