ನಾಗಪುರ(ಪಿಟಿಐ): ಜಾಗತಿಕವಾಗಿ ಎಲ್ಲರೂ ಒಪ್ಪುವಂತಹ ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಕರೆ ನೀಡಿದ್ದಾರೆ.
ಪ್ರಸಕ್ತ ಶಿಕ್ಷಣ ನೀತಿಯಲ್ಲಿ ಜನರಿಗೆ ಸಮಾಧಾನ ಇಲ್ಲ. ಬೋಧನೆ ಹಾಗೂ ಕಲಿಕಾ ವಿಧಾನದಲ್ಲಿ ಸಮಗ್ರ ಬದಲಾವಣೆಯಾಗಬೇಕು ಎಂದು ಶಿಕ್ಷಣ ತಜ್ಞರ ಸಮಾವೇಶದಲ್ಲಿ ತಿಳಿಸಿದ್ದಾರೆ.