ಇನ್ನು, ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಕರವಾಲ್ ನಗರ ಶಾಸಕ ಹಾಗೂ ಎಎಪಿ ವಕ್ತಾರ ಕಪಿಲ್ ಮಿಶ್ರಾ, ‘ಮೋದಿ ಅವರ ನೇತೃತ್ವದ ಸರ್ಕಾರ ಕಳೆದೊಂದು ವರ್ಷದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಒಂದೇ ಒಂದು ಭರವಸೆಯನ್ನು ಈಡೇರಿಸಲು ಅದಕ್ಕೆ ಸಾಧ್ಯವಾಗಿಲ್ಲ. ಪ್ರಧಾನಿ ಎಲ್ಲಿದ್ದಾರೆ ಅಥವಾ ಅವರ ಸಂಪುಟದ ಸಚಿವರು ಎಲ್ಲಿದ್ದಾರೆ ಎಂದು ಜನತೆ ಪ್ರಶ್ನಿಸುತ್ತಿದೆ’ ಎಂದು ಟೀಕಿಸಿದ್ದಾರೆ.
ಒಳ್ಳೆಯ ದಿನಗಳ ತಿಥಿ:
ಪ್ರತಿಭಟನಾ ನಿರತ ಎಎಪಿ ಕಾರ್ಯಕರ್ತರು, ‘ಒಳ್ಳೆದಿನಗಳ ಪುಣ್ಯತಿಥಿ, ಮಧ್ಯಮ ವರ್ಗ ವಿರೋಧಿ ಮೋದಿ ಸರ್ಕಾರ, ರೈತ ವಿರೋಧಿ ಮೋದಿ ಸರ್ಕಾರ’ ಬಿತ್ತಿ ಫಲಕಗಳನ್ನು ಹಿಡಿದಿರುವುದು ಕಂಡು ಬಂತು.