ನವದೆಹಲಿ (ಪಿಟಿಐ): ಮೊದಲು ಬಡ್ತಿ ನಿರಾಕರಿಸಿದ ಸರ್ಕಾರಿ ನೌಕರ ನಂತರದ ಹಂತದಲ್ಲಿ ಮತ್ತೆ ಬಡ್ತಿ ಕೇಳು-ವಂತಿಲ್ಲ ಎಂದು ಸುಪ್ರೀಂ-ಕೋರ್ಟ್ ಹೇಳಿದೆ.
ಮಧ್ಯಪ್ರದೇಶದ ಸರ್ಕಾರಿ ನೌಕರ ರಮಾನಂದ್ ಪಾಂಡೆ ಎಂಬುವವ-ರನ್ನು ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ವರ್ಗಾ-ವಣೆ-ಗೊಳ್ಳಲು ಇಷ್ಟಪಡ-ದಿದ್ದರಿಂದ ಬಡ್ತಿ ನಿರಾಕರಿಸಿದ್ದರು. ಸರ್ಕಾರ ಅವರಿಗೆ ನೀಡಿದ್ದ ಬಡ್ತಿ-ಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಎರಡು ವರ್ಷಗಳ ಬಳಿಕ ಅಂದರೆ ೨೦೦೮ರ ಅಕ್ಟೋಬರ್ ೨೪ರಂದು ಮಧ್ಯಪ್ರದೇಶ ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದರು.
ಪಾಂಡೆಗೆ ವಾಪಸ್ ಬಡ್ತಿ ನೀಡ-ಬೇಕು ಎಂದು ಮಧ್ಯಪ್ರದೇಶ ಸರ್ಕಾ-ರಕ್ಕೆ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ-ಕೋರ್ಟ್ ಮೊರೆ ಹೋ-ಗಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ-ಕೋರ್ಟ್ ವಜಾಗೊಳಿಸಿದೆ. ‘ವರ್ಗಾ-ವಣೆ ಬೇಡ ಎನ್ನುವ ಕಾರ-ಣಕ್ಕೆ ಪಾಂಡೆ ಬಡ್ತಿ ನಿರಾಕರಿಸಿದ್ದರು. ಇದ-ರಲ್ಲಿ ಸರ್ಕಾ--ರದ ತಪ್ಪು ಇಲ್ಲ. ಇದಕ್ಕೆ ಪಾಂಡೆ ಅವರೇ ಹೊಣೆ. ಹೈಕೋ-ರ್ಟ್ ಆದೇ-ಶವು ಕಾನೂನಿಗೆ ವಿರುದ್ಧ-ವಾಗಿದೆ’ ಎಂದು ನ್ಯಾಯ-ಮೂರ್ತಿ ಜೆ.ಚಲಮೇ-ಶ್ವರ್ ಪೀಠ ಹೇಳಿತು.