ಸಂತ ಕಬೀರರ ಬದುಕನ್ನಾಧರಿಸಿದ ‘ಸಂತೆಯಲ್ಲಿ ನಿಂತ ಸಂತ ಕಬೀರ’ ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಿದೆ. ನಟ ಶಿವರಾಜಕುಮಾರ್ ಕಬೀರರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಂದ್ರಬಾಬು ಈ ಚಿತ್ರದ ನಿರ್ದೇಶಕರು. ಅಲ್ಲದೇ ತಮಿಳು ನಟ ಶರತ್ ಕುಮಾರ್, ಹಿಂದಿಯ ಓಂಪುರಿ ಕೂಡ ಪಾತ್ರ ನಿರ್ವಹಿಸುತ್ತಿದ್ದಾರೆ.
ಎರಡನೇ ಹಂತದ ಈ ಚಿತ್ರೀಕರಣದಲ್ಲಿ ಶಿವರಾಜಕುಮಾರ್, ಸನುಷ್, ಭಾಗೀರಥಿ ಬಾಯಿ ಕದಂ, ಸುನೀತಾ ರಾಮಾಚಾರಿ ಮುಂತಾದವರು ಭಾಗವಹಿಸಲಿದ್ದಾರೆ.
ಬೆಂಗಳೂರು ಅರಮನೆ ಆವರಣ, ಕುಲು ಮನಾಲಿಗಳಲ್ಲಿ ಮುಂದಿನ ಹಂತದ ಚಿತ್ರೀಕರಣ ಸಾಗಲಿದೆ. ಗೋಪಾಲ ವಾಜಪೇಯಿ ಅವರ ಚಿತ್ರಕಥೆ, ಸಂಭಾಷಣೆ ಇರುವ ಈ ಚಿತ್ರಕ್ಕೆ ಹಿಂದಿಯ ಇಸ್ಮಾಯಿಲ್ ದರ್ಬಾರ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಇದೆ. ದತ್ತಣ್ಣ, ಅವಿನಾಶ್, ಶರತ್ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ. ಕುಮಾರಸ್ವಾಮಿ ಪತ್ತಿಕೊಂಡ ಚಿತ್ರದ ನಿರ್ಮಾಪಕರು.