ಶ್ರೀನಗರ/ನವದೆಹಲಿ: ‘ಅಜ್ಮಲ್ ಕಸಾಬ್ ಮುಂಬೈ ದಾಳಿ ವೇಳೆ ಮಾಡಿದ ತಪ್ಪನ್ನು ನೀವೂ ಮಾಡಬೇಡಿ’.
–ಪಾಕಿಸ್ತಾನ ಮೂಲದ ಲಷ್ಕರ್–ಎ–ತಯಬಾ (ಎಲ್ಇಟಿ) ತನ್ನ ನೂತನ ಸದಸ್ಯರಿಗೆ ತರಬೇತಿ ನೀಡುವಾಗ ಹೇಳುವ ಕಿವಿ ಮಾತು ಇದು.
ಕಳೆದ ತಿಂಗಳು ದಕ್ಷಿಣ ಕಾಶ್ಮೀರದಲ್ಲಿ ಬಂಧಿತನಾದ ಎಲ್ಇಟಿ ಉಗ್ರ ಮೊಹಮ್ಮದ್ ನವೀದ್ ಜಟ್ ಅಲಿಯಾಸ್ ಅಬು ಹಂಜಾಲಾ ಈ ವಿಷಯ ಬಾಯಿಬಿಟ್ಟಿದ್ದಾನೆ. ‘ಮುಂಬೈ ಕರಾವಳಿಗೆ ತಮ್ಮನ್ನು ಕರೆದುಕೊಂಡು ಬಂದಿದ್ದ ದೋಣಿಯನ್ನು ಧ್ವಂಸಗೊಳಿಸಿರಲಿಲ್ಲ. ಕಸಾಬ್್ ಮಾಡಿದ ತಪ್ಪುಗಳಲ್ಲಿ ಇದೂ ಒಂದು’ ಎಂದು ತರಬೇತಿ ನೀಡುವಾಗ ಎಲ್ಇಟಿ ಹೇಳಿತ್ತು.
ರೈಲ್ವೆಯಲ್ಲಿ ಎಫ್ಡಿಐ: ವಿರೋಧ
ನವದೆಹಲಿ (ಪಿಟಿಐ): ರೈಲ್ವೆ ವಲಯದ ಅತಿಸೂಕ್ಷ್ಮ ವಿಭಾಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅನುಮತಿ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿರುವ ಗೃಹಸಚಿವಾಲಯ, ಇದು ದೇಶದ ಅತಿ ದೊಡ್ಡ ಸಾರಿಗೆ ಜಾಲದ ಭದ್ರತೆಗೆ ತೊಡಕಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.
ಅತಿ ವೇಗದ ರೈಲ್ವೆ ವ್ಯವಸ್ಥೆ ಮತ್ತು ಸರಕು ಸಾಗಣೆ ರೈಲು ಮಾರ್ಗದಂಥ ವಿಭಾಗಗಳಲ್ಲಿ ಶೇಕಡ 100ರಷ್ಟು ಎಫ್ಡಿಐ ಹೂಡಿಕೆಯ ಕರಡು ಪ್ರಸ್ತಾವನೆಗೆ ಸಚಿವಲಯ ವಿರೋಧ ವ್ಯಕ್ತಪಡಿಸಿದೆ.