ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಆಡಳಿತ ಮಂಡಳಿಗೆ 2016-17ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎ. ಪದ್ಮನಾಭ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಇತರ ಪದಾಧಿಕಾರಿಗಳಾಗಿ ಆರ್.ಹನುಮಂತೇಗೌಡ (ಉಪಾಧ್ಯಕ್ಷ), ಬಿ. ಪ್ರವೀಣ್ (ಗೌರವ ಪ್ರಧಾನ ಕಾರ್ಯದರ್ಶಿ), ಟಿ.ದಿವಾಕರ ರೆಡ್ಡಿ ( ಜಂಟಿ ಕಾರ್ಯದರ್ಶಿ–1), ನಿಂಗಣ್ಣ ಎಸ್. ಬಿರಾದರ (ಜಂಟಿ ಕಾರ್ಯದರ್ಶಿ -2) ಮತ್ತು ಜಿ.ಮುರಳಿ ಅವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.