ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಸ್‌ಮಸ್‌ವರೆಗೆ ಬಂದೋಬಸ್ತ್‌’

ಮತಾಂತರ ಕಾರ್ಯಕ್ರಮ ರದ್ದು
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಲೀಗಡ (ಪಿಟಿಐ): ಧರ್ಮ ಜನ­ಜಾಗರಣ ಸಮಿತಿ ಡಿಸೆಂ­ಬರ್‌ 25ರಂದು ಆಯೋ­ಜಿಸಿದ್ದ ಮತಾಂ­ತರ ಕಾರ್ಯ­ಕ್ರಮ ರದ್ದುಗೊಳಿ­ಸಿದ್ದರೂ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಧರ್ಮ ಜನಜಾಗೃತಿ ಸಮಿತಿ ನಿರ್ಧಾರ­­ವನ್ನು ಜಿಲ್ಲಾಧಿಕಾರಿ ಅಭಿ­ಷೇಕ್‌ ಪ್ರಕಾಶ ಸ್ವಾಗತಿಸಿದ್ದು, ಕ್ರಿಸ್‌­ಮಸ್‌ ಮುಗಿಯುವವರೆಗೂ ಬಂದೋ­ಬಸ್ತ್‌ ಮುಂದುವರಿ­ಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಅಶಾಂತಿಗೆ ಕಾರಣವಾಗುವ ಇಂತಹ ಕಾರ್ಯಕ್ರಮಗಳನ್ನು ಆಯೋ­ಜಿ­ಸಲು ಅವಕಾಶ ನೀಡುವುದಿಲ್ಲ’ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಉದ್ದೇಶಿತ ‘ಘರ್ ವಾಪಸಿ (ಮತಾಂತರ ಕಾರ್ಯಕ್ರಮ)’ ಕಾರ್ಯ­ಕ್ರಮವನ್ನು ರದ್ದುಗೊಳಿ­ಸಲಾಗಿದೆ ಎಂದು ಧರ್ಮ ಜನಜಾಗೃತಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯ ಪ್ರಕಾಶ ನೌಮನ್‌ ಮಂಗಳವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT