ದೆಹಲಿಯಲ್ಲಿ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆ.ಗವರ್ನರ್ ಅವರಿಗೂ ಇದೆ ಎಂದು ಕೇಂದ್ರ ಗೃಹ ಇಲಾಖೆಯು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಸಂಪೂರ್ಣವಾಗಿ ಸೋತಿದೆ. ಈಗ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಎಎಪಿಯ ಭ್ರಷ್ಟಚಾರ ವಿರುದ್ಧದ ಕ್ರಮಗಳಿಂದ ಹೆದರಿರುವ ಬಿಜೆಪಿ ಲೆ.ಗವರ್ನರ್ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಈ ಅಧಿಸೂಚನೆಯು ಬಿಜೆಪಿಯ ಮತ್ತೊಂದು ಸೋಲು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಗೃಹ ಇಲಾಖೆಯ ಈ ಆದೇಶವನ್ನು ಹಲವು ಎಎಪಿ ಮುಖಂಡರು ಖಂಡಿಸಿದ್ದಾರೆ.