ಬಾಗೇಪಲ್ಲಿ: ಬಯಲು ಸೀಮೆ ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹರಿಸುವ ಜಿ.ಎಸ್.ಪರಮಶಿವಯ್ಯ ವರದಿಯನ್ನು ಮೂಲೆ ಗುಂಪು ಮಾಡಲಾಗಿದ್ದು, ಡಿ.ವಿ. ಸದಾನಂದಗೌಡ, ಎಂ.ವೀರಪ್ಪ ಮೊಯಿಲಿ ಅಕ್ರಮ ಸಂತಾನದ ಕೂಸು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ಬಂಡವಾಳ ಶಾಹಿ ಆರ್ಥಿಕ ಧೋರಣೆಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಜೆಡಿಎಸ್ ಸಹ ಭಿನ್ನವಾಗಿಲ್ಲ ಎಂದರು.
ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರು ಜೆಡಿಎಸ್ ಪಕ್ಷ. ಬಿಜೆಪಿ ಅಭ್ಯರ್ಥಿ ಬಿ. ಎನ್. ಬಚ್ಚೇಗೌಡರಿಗೆ ಮತ ಕೇಳುವ ನೈತಿಕತೆ ಇಲ್ಲ.
ತಾ.ಪಂ. ಉಪಾಧ್ಯಕ್ಷ ಶಂಕರರೆಡ್ಡಿ, ಜಿ.ಪಂ.ಸದಸ್ಯೆ ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾರಾಣಿ, ಮುಖಂಡರಾದ ರಾಮಲಿಂಗಪ್ಪ, ಮಹಮದ್ ಅಕ್ರಂ, ಆರೀಫ್ ಇದ್ದರು.