ಶುಭ ನುಡಿ ಕೇಳಿರಬಹುದು; ಈಗ ಶುಭ ಗಾನ ಕೇಳಲು ಸಿದ್ಧ. ನಾಯಕಿ ಶುಭ ಪೂಂಜಾ ಅವರು ವೃತ್ತಿ ಜೀವನದಲ್ಲಿ ಮೊದಲ ಬಾರಿ ‘ತರ್ಲೆ ನನ್ ಮಕ್ಳು’ ಹಾಡು ಹೇಳಿದ್ದಾರೆ. ‘ಕುಣಿಲಾರದ ಹುಡುಗ್ರು ಕಾಲೆ ಕುಂಟಂತೆ’ ಎಂಬ ಗೀತೆಯನ್ನು ಸೂರ್ಯವಂಶಿ ಸಂಗೀತ ನಿರ್ದೇಶನದಲ್ಲಿ ಶುಭ ಪೂಂಜಾ ಹಾಡಿದ್ದಾರೆ.
ಇದೇ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರದು ಅತಿಥಿ ಪಾತ್ರ. ಐವರು ನಿರ್ದೇಶಕರುಗಳಾದ ವಿ.ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ.ಪಿ.ಅರ್ಜುನ್, ಸುನಿ ಹಾಗೂ ವಿ. ಮನೋಹರ್ ರಚಿಸಿರುವ ಹಾಡಿಗೆ ಉಪೇಂದ್ರ, ಜಗ್ಗೇಶ್, ಪ್ರೇಮ್, ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಿರುವುದು ಇನ್ನೊಂದು ವಿಶೇಷ.
ರಾಕೇಶ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ನಿರ್ಮಾಪಕರು ಸಚ್ಚಿದಾನಂದ ಮತ್ತು ಸುರೇಶ್ ಕುಮಾರ್. ಸೂರ್ಯವಂಶಿ ಅವರಿಗೂ ಇದು ಮೊದಲ ಚಿತ್ರ. ಜೆರಾಲ್ಡ್ ಛಾಯಾಗ್ರಹಣ ಚಿತ್ರಕ್ಕಿದೆ. ಯತಿರಾಜ್, ಅಂಜನ ದೇಶಪಾಂಡೆ, ನಾಗಶೇಖರ್, ಶುಭ ಪೂಂಜಾ, ಸೌಜನ್ಯ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.