ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದಾಗ, ಗಣ್ಯ ವ್ಯಕ್ತಿಗಳು ‘ನನ್ನ ತೇಜೋವಧೆಯ ಪ್ರಯತ್ನ’ ಎಂಬ ಹೇಳಿಕೆ ಕೊಡುವುದು ಸಾಮಾನ್ಯ ತಾನೆ. ಮೂಲಭೂತ ಪ್ರಶ್ನೆಯೆಂದರೆ, ಅಂಥವರಲ್ಲಿ ಯಾವ ತೇಜಸ್ಸಿರುತ್ತದೆ ಎಂಬುದು! (ದೇಹ ವಧೆಯ ಪ್ರಯತ್ನ ಎಂದರೆ ಅರ್ಥ ಮಾಡಿಕೊಳ್ಳಬಹುದು).
‘ವಿಭೂತಿ ಮತ್ತಾದುದೆಲ್ಲ ನನ್ನ ತೇಜಸ್ಸಿನ ಅಂಶದಿಂದ ಹುಟ್ಟಿದ್ದು’ ಎಂಬುದು ಗೀತೆಯಲ್ಲಿ ಕೃಷ್ಣೋಕ್ತಿ. ಆ ಭ್ರಷ್ಟರು ದೈವೀ ‘ತೇಜೋಂಶ ಸಂಭವ’ರೆ? ಛೆ!