‘ನೊಣಗಳ ಹಾವಳಿ ತಪ್ಪಿಸಿ’ (ವಾ.ವಾ., ಸೆ. 24). ಚಾರಿತ್ರಿಕ ಸಂಗತಿಯೊಂದು ನೆನಪಾಗುತ್ತದೆ. 1915ರಲ್ಲಿ ‘ಸಾಹಿತ್ಯ ಪರಿಷತ್ತು’ ಸ್ಥಾಪನೆ ಗೊಂಡಾಗ, ಅದರ ಹಿಂದಿನ ವಿಶೇಷಣ ‘ಕರ್ನಾಟಕ’ ಎಂದಿರಬೇಕೊ ‘ಕರ್ಣಾಟಕ’ ಎಂದಿರಬೇಕೊ ಎಂಬುದರ ಬಗೆಗೆ ಭಾರಿ ವಾದ ವಿವಾದಗಳು ನಡೆದುವಂತೆ! ಕಡೆಗೆ, ಎರಡೂ ಬೇಡ, ‘ಕನ್ನಡ’ (ಸಾಹಿತ್ಯ ಪರಿಷತ್ತು) ಎಂದಿರಲಿ ಎಂದು ತೀರ್ಮಾನವಾಯಿತಂತೆ.
ಸ್ವಾರಸ್ಯವೆಂದರೆ, ಆ ‘ಮಹಾ’ ವಿವಾದವನ್ನು ಹಳೆಯ ಸಾಹಿತಿಯೊಬ್ಬರು ‘ನೊಣ’ ವ್ಯಾಜ್ಯ (ನೊಣ ಜಗಳ) ಎಂದು ಗೇಲಿ ಮಾಡಿದ್ದು! (ಕನ್ನಡಿಗರಿಗೆ ನೊಣಗಳಲ್ಲಿ ಆಸಕ್ತಿ, ಆನೆ ಹುಲಿಗಳಲ್ಲಲ್ಲ) ಅದೆಲ್ಲ ಈಗ ನಗು ಬರಿಸುತ್ತದೆ!