ಪೀಣ್ಯ ದಾಸರಹಳ್ಳಿ: ‘ಪರ ಭಾಷಿಕರು ಕನ್ನಡ ಕಲಿಯುವ ಮೂಲಕ ಕರ್ನಾಟಕ ಭಾವೈಕ್ಯತೆಯನ್ನು ಸವಿಯಲು ಸಹಕಾರಿಯಾಗುತ್ತದೆ’ ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ದಾಸರಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು, ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ದಾಸರ ಹಳ್ಳಿಯ ದಿವ್ಯಜ್ಯೋತಿ ಧ್ಯಾನ ಮಂದಿ ರದಲ್ಲಿ ಭಾನುವಾರ ಆಯೋಜಿಸಿದ್ಧ ‘ಪರಭಾಷಿಕರಿಗೆ ಕನ್ನಡ ಕಲಿಕೆ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಅನ್ಯ ಭಾಷಿಕರು ಕನ್ನಡ ಕಲಿಯುವು ದರಿಂದ ವ್ಯವಹಾರ ಮಾಡಲು ಸಹಕಾರಿಯಾಗುವುದರ ಜೊತೆಗೆ ನಾಡಿನ ನೆಲ ಜಲ ಗುಣಗಳ ಬಗ್ಗೆ ತಿಳಿಯಬಹುದು’ ಎಂದರು.