ಮುಂಬೈ (ಪಿಟಿಐ): ಮಿತ್ರ ಪಕ್ಷ ಶಿವಸೇನಾ ವಿರೋಧಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಯಾವುದೇ ಕಾರಣಕ್ಕೂ ಜೈತಾಪುರ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಕೈಬಿಡುವ ಪ್ರಶ್ನೆಯೇ ಇಲ್ಲ. ದೇಶಕ್ಕೆ ವಿದ್ಯುತ್ ಉತ್ಪಾದನೆಯ ಅವಶ್ಯಕತೆ ಇದೆ ಎಂದಿದ್ದಾರೆ.
ಯೋಜನೆ ಅನುಷ್ಠಾನದಿಂದ ಈ ಸಮಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಡಾಖಂಡಿತ ವಾಗಿ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಣುಸ್ಥಾವರ ಸ್ಥಾಪನೆ ಬೇಡ ಎಂದು ಮಿತ್ರಪಕ್ಷ ಶಿವಸೇನೆ ವಿರೋಧಿಸುತ್ತಲೇ ಬಂದಿದೆ. ಎಷ್ಟೇ ಖರ್ಚಾದರೂ ಸ್ಥಾಪನೆ ಮಾಡಲಿದ್ದೇವೆ ಎಂದಿದ್ದಾರೆ.