ಆದರೆ, ‘ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ. ಅವನು ಸಿಕ್ಕೊಡನೆ ಆತನ ಹಸ್ತಾಂತರದ ಪ್ರಕ್ರಿಯೆಗೆ ಚಾಲನೆ ನೀಡಿಲಾಗುವುದು’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಎಚ್.ಪಿ.ಚೌಧರಿ ಅವರು ಕಳೆದ ವಾರದ (ಮೇ 5) ಲೋಕಸಭೆಯಲ್ಲಿ ತಿಳಿಸಿದ್ದರು.
ಚೌಧರಿ ಅವರು ಹೇಳಿಕೆ ನೀಡಿದ ನಂತರದ ಕೆಲವು ಗಂಟೆಗಳಲ್ಲಿಯೇ ಗೃಹಖಾತೆಯ ಮತ್ತೊಬ್ಬ ರಾಜ್ಯ ಸಚಿವ ಕಿರಣ್ ರಿಜಿಜು ಅವರು ‘ದಾವೂದ್ ಪಾಕಿಸ್ತಾನದಲ್ಲಿದ್ದಾನೆ’ ಎಂದು ಸಂಸತ್ತಿನ ಹೊರಗಡೆ ಹೇಳಿಕೆ ನೀಡಿದ್ದರು.