ಮಾಗಡಿ: ಪ್ರತಿಭೆ ಸಾಧಕರ ಸ್ವತ್ತು. ಸೋಮಾರಿಗಳ ಸ್ವತ್ತಲ್ಲ, ಎಲ್ಲಾ ಸಮುದಾಯಗಳಲ್ಲೂ ಪ್ರತಿಭಾವಂತ ಮಕ್ಕಳಿದ್ದಾರೆ, ಆದರೆ ಅವರಿಗೆ ಪ್ರೋತ್ಸಾಹವಿಲ್ಲದೆ ವಿದ್ಯೆಯನ್ನು ಮೊಟಕು ಮಾಡುತ್ತಿದ್ದಾರೆ ಎಂದು ತಿಗಳಗೌಡ ಸಮುದಾಯದ ಮುಖಂಡ ಎಚ್.ಜಿ.ರವಿ ಅಭಿಪ್ರಾಯ ಪಟ್ಟರು.
ಅಗ್ನಿಬನ್ನಿರಾಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಬಿಸ್ಕೂರಿನಲ್ಲಿ ಮಂಗಳವಾರ ನಡೆದ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.