ವೈಟ್ಫೀಲ್ಡ್: ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದು ‘ಸ್ಟಾಪ್ ಹಂಗರ್ ನೌ’ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡೋಲಾ ಮೊಹಪಾತ್ರ ಹೇಳಿದರು.
ಬುಧವಾರ ಇಲ್ಲಿಗೆ ಸಮೀಪದ ಬೆಳ್ಳಂದೂರು ಎಕೋಸ್ಪೇಸ್ ನಲ್ಲಿ ಬ್ರಾಡ್ಕಾಂ ಫೌಂಡೇಶನ್ ಮತ್ತು ಸ್ಯಾನ್ ಡಿಸ್ಕ್ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ‘ಸ್ಟಾಪ್ ಹಂಗರ್ ನೌ’ ಬೆಂಗಳೂರು ಘಟಕ ಉದ್ಘಾಟಿಸಿ ಮಾತನಾಡಿದರು.
ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಒದಗಿಸುವ ಅಗತ್ಯ ಇದ್ದು, ಇದಕ್ಕಾಗಿ ತಮ್ಮ ಸಂಸ್ಥೆ ಕಳೆದ 15 ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಒದಗಿಸುತ್ತಿದೆ. ಭಾರತ ದೇಶದ ಬಡ ಶಾಲಾ ಮಕ್ಕಳ ಉತ್ತೇಜನಕ್ಕೆ ಸೇವಾ ಸಂಸ್ಥೆ ಆರಂಭಿಸಲಾಗಿದೆ ಎಂದರು.
ಬ್ರಾಡ್ಕಾಂ ಫೌಂಡೇಶನ್ ಅಧ್ಯಕ್ಷ ಪೌಲಾ ಗೋಲ್ಡನ್, ಕಳೆದ 7 ವರ್ಷಗಳಿಂದ ಸ್ಟಾಪ್ ಹಂಗರ್ ನೌ ಬಡ ಮಕ್ಕಳು, ನಾಗರಿಕರಿಗೆ ಸಹಕಾರಿ ಆಗಿದೆ. 4 ಸರ್ಕಾರಿ ಶಾಲೆಗಳ ದತ್ತು ಪಡೆದು ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.