ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹಿರಂಗ ಪಡಿಸಿದರೆ ಮುಜುಗರ’

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕು­ಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವವರ ಹೆಸರುಗಳನ್ನು ಬಹಿರಂಗಪಡಿಸಿದರೆ ಕಾಂಗ್ರೆಸ್‌ ಪಕ್ಷ ಮುಜುಗರ ಅನುಭವಿಸ­ಬೇಕಾಗುತ್ತದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಗಳ-ವಾರ ಲೇವಡಿ ಮಾಡಿದ್ದಾರೆ.

‘ಕಪ್ಪು ಹಣ ಇರಿಸಿರುವವರ ಹೆಸರು­ಗಳನ್ನು ಶೀಘ್ರವೇ ಬಹಿರಂಗಪಡಿ­ಸಲಾ­ಗುತ್ತದೆ. ಇದರಿಂದ ಖಂಡಿತವಾಗಿಯೂ ಬಿಜೆಪಿಗೆ ಮುಜುಗರ ಆಗುವು-ದಿಲ್ಲ. ಈ ಹೆಸರುಗಳನ್ನು ನೋಡಿ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ವಿದೇಶಿ ಬ್ಯಾಂಕುಗಳಲ್ಲಿ  ಅಕ್ರಮ­ವಾಗಿ ಹಣ ಇಟ್ಟಿರುವವರ ಹೆಸರನ್ನು ಬಿಜೆಪಿ ಬಹಿರಂಗಪಡಿ-ಸುವುದಿಲ್ಲ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಕಾನೂನು ವಿಧಿಗಳನ್ನು ಅನುಸರಿ-ಸಿದ ನಂತರ ನಾವು ಹೆಸರುಗಳನ್ನು ಬಹಿರಂಗಪ­ಡಿಸುತ್ತೇವೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT