‘2013ರಲ್ಲಿ ಪಾಕ್ 347 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. 2014ರಲ್ಲಿ ಈ ಸಂಖ್ಯೆ 562ಕ್ಕೆ ಏರಿಕೆಯಾಗಿದೆ. ಗಡಿಯಲ್ಲಿರುವ ಸುಮಾರು 32 ಸಾವಿರ ಮಂದಿ ಈಗಾಗಲೇ ಗಡಿ ಪ್ರದೇಶವನ್ನು ತೊರೆದು ಬೇರೆಡೆ ವಾಸ್ತವ್ಯ ಹೂಡಿದ್ದಾರೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಪ್ರಕಟಿಸಿದೆ.
‘ಭಾರತದ ಸೈನಿಕರು ಪಾಕಿಸ್ತಾನಿ ಸೈನಿಕರನ್ನು ಕೊಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಂಡಾಗ ಮಾತ್ರ ಪಾಕ್ ದಾಳಿ ನಿಲ್ಲಿಸುತ್ತದೆ. ಸಣ್ಣ ದೇಶವಾದ ಪಾಕಿಸ್ತಾನವೇ ಇಷ್ಟೊಂದು ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದಾಗ ಭಾರತ ಉಲ್ಲಂಘಿಸುವುದರಲ್ಲಿ ತಪ್ಪಿಲ್ಲ’ ಎಂದು ಸೇನಾ ಹೇಳಿದೆ.