ಚಂಡೀಗಡ್ (ಪಿಟಿಐ): ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ದಿವಂಗತ ಶಿಕ್ಷಣ ತಜ್ಞ ಮದನ ಮೋಹನ ಮಾಳವೀಯ ಅವರಿಗೆ ಅಭಿನಂದನೆ ಸಲ್ಲಿಸಿರುವ ಖ್ಯಾತ ಅಥ್ಲೀಟ್ ಮಿಲ್ಖಾಸಿಂಗ್, ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರೂ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಯೋಗ್ಯ ವ್ಯಕ್ತಿ ಎಂದು ಒತ್ತಿ ಹೇಳಿದ್ದಾರೆ.